ಶುಕ್ರವಾರ, ಫೆಬ್ರವರಿ 11, 2011

ಆರುಷಿ--ಕೊಲೆ--ನಿರುತ್ತರ

ಸಾಲೆಯಲ್ಲಿ ಓದಿದ ನೆನಪು--ಮೂರು ಪದಗಳು-ಕಾರ್ಯಾಂಗ,ಶಾಸಕಾಂಗ,ನ್ಯಾಯಾಂಗ. ಈ ಅಂಗಗಳ ಪೈಕಿ
ನಮ್ಮ ದೇಶದಲ್ಲಿ ಕ್ರಿಯಾಶೀಲವಾಗಿರುವುದು ನ್ಯಾಯಾಂಗ ಮಾತ್ರ. ಇತ್ತೀಚಿನ ದಿನಗಳಲ್ಲಿ ಅದು ಪದೇ ಪದೇ
ಸರಕಾರದ ಕಿವಿ ಹಿಂಡುತ್ತಿದೆ. ಅದು ಅಶೋಕ್ ಚವಾಃಣ್ ಗೆ ಕೊಟ್ಟ ಮಂತ್ರಿಗಿರಿಯೇ ಆಗಿರಲಿ,ಕಪ್ಪುಹಣದ ವಿಚಾರವಿರಲಿ,ಸಿಬಲ್ ನ ಉದ್ಧಟತನದ ಮಾತುಗಳಾಗಿರಲಿ ನ್ಯಾಯಾಂಗ ಸಕಾಲಿಕ ಎಚ್ಚರಿಕೆ ಕೊಟ್ಟಿದೆ.  
  
ಕೇಸನ್ನು ಮುಚ್ಚಿ ನಿರಾಳವಾದ
ಸಿಬಿಐ ನ್ನು ಅದು ತರಾಟೆಗೆ ತೆಗೆದುಕೊಂಡಿತು.ಸಿಬಿಐ ಮುಚ್ಚಿದ ಕೇಸು ಆರುಷಿಯದು. ಅವಳು ಕೊಲೆಯಾಗಿ ಮೂರುವರ್ಷ ಕಳೆದರೂ ಕೊಲೆಗಾರ ಪತ್ತೆಯಾಗಿಲ್ಲ. ಅವಳು ಮೈನರ್ ಹುಡುಗಿ. ಸಂಶಯಾಸ್ಪದವಾಗಿ ಸಾವು ಆಗಿತ್ತು.
ಎರಡು ದಿನದ ನಂತರ ಅವರ ಮನೆ ಮಹಡಿಮೇಲೆ ದೊರೆತ ನೌಕರನ ಶವ ಹೀಗೆ ಅನುಮಾನದ ಹುತ್ತ ಬಲವಾಗಿತ್ತು.
ನೋಯ್ಡಾ ಪೋಲಿಸರು ಸಿಬಿಐಗೆ ಕೇಸು ವರ್ಗಾಯಿಸಿದಾಗ ನಿರಾಳವಾದರು.ಎರಡು ವರೆ ವರ್ಷ ಹೆಣಗಾಡಿದರೂ
ಕೇಸು ಬಗೆಹರಿದಿಲ್ಲ. ಸಿಬಿಐ ಕಾರ್ಯವೈಖರಿ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅವರು ನಡೆಸಿದ ವಿಚಾರಣೆಗಳು,
ಮಂಪರು ಪರೀಕ್ಷೆಗಳು ಫಲ ನೀಡದೇ ಹೋಗಿವೆ. ಕೇಸನ್ನು ಮುಚ್ಚಲು ಅದು ಮನವಿಮಾಡಿದಾಗ ನ್ಯಾಯಾಂಗ ಚಾವಟಿ  ಬೀಸಿದೆ.ಆರುಷಿಯ ತಂದೆ ತಾಯಿ ಯನ್ನು ಬಂಧಿಸಿ ವಿಚಾರಿಸುವಂತೆ ಆದೇಶ ನೀಡಿದೆ.
 ಅವರು ಅಪರಾಧಿಗಳು ಅಂತ ತೀರ್ಪು ಹೊರಬಿದ್ದಿಲ್ಲ ಆದರೂ ಅವರನ್ನು ದೋಷಿ ಅಂತ ಪರಿಗಣಿಸಿ ವಿಚಾರಣೆ ಮಾಡುವಂತೆ
ತೀರ್ಪು ನ್ಯಾಯಾಂಗ ಕೇಳಿದೆ.
ಆರುಷಿ ಶವದ ಪೋಸ್ಟಮಾರ್ಟಮ್ ನಲ್ಲಿ ಅವಳ ಗುಪ್ತಾಂಗ, ಸುತ್ತಲಿನ ಭಾಗ ಔಷಧಿಯಿಂದ ತೊಳೆದ ಉಲ್ಲೇಖವಿಲ್ಲ.
ಅಥವಾ ಬೇಕೂಂತಲೇ ಅದನ್ನು ಮುಚ್ಚಿ ಹಾಕಿದ್ದಾರೆ.

ಎರಡು ಸಾಧ್ಯತೆಗಳಿವೆ...
ಮನೆ ಆಳು ಆರುಷಿಯನ್ನು ರೇಪ್ ಮಾಡಿರಬಹುದು ತಂದೆಗೆ ಗೊತ್ತಾಗಿ ತಲ್ವಾರ್ ಡಾಕ್ಟರ್ ಇಬ್ಬರನ್ನೂ ಮುಗಿಸಿದ್ದಾನೆ. ಇದೊಂಥರಾ "ಮರ್ಯಾದಾ ಹತ್ಯೆ" ಅನ್ನಬಹುದು. ಅಂದರೆ ಮಗಳು ರೇಪ್ ಗೆ ಒಳಗಾಗಿದ್ದಾಳೆ
ಇದು ಗೊತ್ತಾದರೆ ತಮ್ಮ ಗೌರವಕ್ಕೆ ಕುಂದು ಬಂದೀತು ಇದು ತಲ್ವಾರ್ ಅಂದುಕೊಂಡಿರಬಹುದೇನೋ... ಅಥವಾ
ಆಳಿನ ಜೊತೆ ಮಗಳು ಸಂಭಂದ ಇಟ್ಟುಕೊಂಡಿದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಾಗ ಆವೇಶದಲ್ಲಿ ತಲ್ವಾರ್ ಇಬ್ಬರನ್ನು ಕೊಂದಿರಬಹುದು.

ಇನ್ನೊಂದು ಸಾಧ್ಯತೆ--ನಂಬಲು ಇರಿಸು ಮುರಿಸಾಗಬಹುದು. ಆರುಷಿ ತನ್ನ ತಂದೆಯ ತೃಷೆಗೆ ಒಳಗಾಗಿ ಆಳು
ಇದನ್ನು ಬ್ಲಾಕ್ ಮೇಲ್ ಗೆ ಬಳಸುತ್ತಿದ್ದುದು ರೋಸಿದ ತಲ್ವಾರ್ ಇಬ್ಬರಿಗೂ ಗತಿಕಾಣಿಸಿರಬಹುದು.


ಆರುಷಿಯ ಕೊಲೆ ಅನೇಕ ಮಾಧ್ಯಮಗಳಲ್ಲಿ, ಚಾನೆಲ್ ಗಳಲ್ಲಿ ಚರ್ಚೆಯಾಗಿದೆ. ತಲ್ವಾರ್ ಕೋರ್ಟಗೆ ಹಾಜರಾದಾಗ
ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದು .ಹೀಗೆ ಬಿಸಿ ಬಿಸಿ ಸುದ್ದಿ ಹರಿದಾಡಿವೆ. ಸಿಬಿಐಯಂಥ ಸಂಸ್ಥೆಯ ಅಸಮರ್ಥತೆ ನಿರಾಶಾದಾಯಕ. ಎಲ್ಲಕ್ಕೂ ಸೋಜಿಗ ಅಂದರೆ ಡಾಕ್ಟರ್ ತಲ್ವಾರ್ ತನ್ನ ಬಂಧನದ ಸುದ್ದಿ ತಿಳಿದು ನಮ್ಮ ದೇಶವನ್ನು
"ಬನಾನಾ ರಿಪಬ್ಲಿಕ್ " ಅಂತ ನಗಾಡಿದ್ದು.ತಲ್ವಾರ್ ನ ಪ್ರಭಾವ ಖಂಡಿತವಾಗಿ ಮೇಲ್ಮಟ್ಟದಲ್ಲಿ ಇದೆ. ಸುಲಭವಾಗಿ
ತನಿಖೆಯ ಹಾದಿತಪ್ಪಿಸುವ ಚಾಣಾಕ್ಷತನವೂ ಅವನಲ್ಲಿದೆ. ಅವ ನಿಜಕ್ಕೂ ದೋಷಿಯೇ..ನಿಜ ಏನು ಅಂತ ಹೇಳಿದರೆ
ನ್ಯಾಯಾಂಗದ ಅನುಕಂಪ ಖಂಡಿತ ಸಿಗುತ್ತದೆ. ಅವನಲ್ಲಿ  ಆ ಪ್ರಾಮಾಣಿಕತೆ ಇದೆಯೇ..?
ಆರುಷಿ ಇದ್ದಾಗ ಸುದ್ದಿಯಾಗದವಳು ಹೋದಮೇಲೆ ಅದೇಕೆ "ಬ್ರೇಕಿಂಗ್ ನ್ಯೂಸ್" ಆಗಿದ್ದಾಳೆ?

ಮಂಗಳವಾರ, ಫೆಬ್ರವರಿ 1, 2011

ನಮ್ಮ ಸಾಂಸ್ಕೃತಿಕ ದಿವಾಳಿ...

ನಿನ್ನೆ  ಬಿಬಿಎಂಪಿಯಲ್ಲಿ ಬಿಜೆಪಿ ಸದಸ್ಯರು ಆಡಿದ ಮಾತು ಮತ್ತೆ ಮತ್ತೆ ನಮ್ಮ ಸಾಂಸ್ಕೃತಿಕ
ದಿವಾಳಿತನ ತೋರಿಸುತ್ತದೆ.ಮಾನ್ಯ ಸದಸ್ಯರು ಭೀಮಸೇನ ಜೋಶಿ ಅವರ ನಿಧನದ ಬಗ್ಗೆ ಸಂತಾಪಸೂಚನೆ ಮಂಡನೆ ವೇಳೆ ಆಡಿದ ಮಾತುಗಳು.
ತಮ್ಮ ನಿಲುವೇನು ತಮ್ಮ ಸ್ಥಾನಮಾನಕ್ಕಂತೂ ಕವಡೆಯ ಕಿಮ್ಮತ್ತಿಲ್ಲ. ತಾನು ಯಾರಬಗ್ಗೆ
ಹೇಳುತ್ತಿರುವೆ ಆ ವ್ಯಕಿ ಗಳಿಸಿದ ಉನ್ನತ ಸ್ಥಾನಯಾವುದಿತ್ತು ಆ ವ್ಯಕ್ತಿಯಬಗ್ಗೆ ತಾನು ಹಗುರಾಗಿ ಮಾತನಾಡಿದರೆ ತನ್ನ  ಕಿಮ್ಮತ್ತೇನು ಯಾವುದು ಆ ಸದಸ್ಯ ಯೋಚಿಸಿಲ್ಲ.
ಇದೇ ಮಾತು ಮಹಾರಾಷ್ಟ್ರದಲ್ಲಿ ಯಾರಾದರೂ ಅಂದಿದ್ದರೆ ಹಾಹಾಕಾರ ವಾಗುತ್ತಿತ್ತು. ನಾವೇಕೆ ಹೀಗೆ ಹೊಸ ಗಾಳಿ ಹೊಸ ಆಲೋಚನೆ ನಮ್ಮೆಡೆಗೆ ಸುಳಿಯದಂತೆ ಕಿಡಕಿ ಮುಚ್ಚಿಕೊಂಡಿದ್ದೇವೆ. ಅದ್ಯಾಕೆ ನಾವು ಇನ್ನೂ ಪ್ರಾಂತ, ಜಾತಿ ಇತ್ಯಾದಿ ಚಿಲ್ಲರೆ ಸಂಗತಿಗಳಿಂದ ಮುಕ್ತವಾಗಿಲ್ಲ. ಭೀಮಸೇನ ಜೋಶಿ ಇಡೀ ಭಾರತದ ಆಸ್ತಿ ನಿಜ. ಆದರೆ ಅವರು ಹುಟ್ಟಿಬೆಳೆದಿದ್ದು ಕನ್ನಡಮ್ಮನ ಮಡಿಲಲ್ಲಿ..! ಬಹುಷಃ  ಅವರು ಹಳೇ ಮೈಸೂರು ಕಡೆಯವರಾಗಿದ್ದು ಕರ್ನಾಟಕಿ
 ಹಾಡಿದ್ದರೆ ಬೇರೆಯಾಗುತ್ತಿತ್ತೇನೋ ! ಒಂದು ನೆನಪಿನ ಸಂಚಿಕೆ ಇಲ್ಲ ಯಾವುದೇ ಚಾನೆಲ್ ನಲ್ಲಿ ಅವರು ಹಾಡಿದ ಹಾಡು ಪ್ರಸಾರವಾಗಲಿಲ್ಲ. ಅನೇಕ ಯುವಗಾಯಕರಿದ್ದಾರೆ ನಮ್ಮಲ್ಲಿ..
ಭೀಮಸೇನ ಜೋಶಿಗೆ ಸ್ಮರಣಾಂಜಲಿ ಅಂತ ತಿಳಿದು ಆ ಯುವಗಾಯಕರಿಂದ ಜೋಶಿ ಜನಪ್ರಿಯಗೊಳಿಸಿದ ದಾಸವಾಣಿ ಹಾಡಿಸಬಹುದಿತ್ತು. ಅದೇ ಝಿ ಮರಾಠಿ ಚಾನೆಲ್ ನವರು ತಮ್ಮ ಜನಪ್ರಿಯ"ನಕ್ಷತ್ರಾಚೆ ದೇಣೆ.."
ಕಾರ್ಯಕ್ರಮ ಮಾಡಿದರು. ಸುಮಾರು ಎರಡುಗಂಟೆಗಳವರೆಗೆ ಜೋಶಿಯವರ ಶಿಷ್ಯರಾದ ಮಾಧವ್ ಗುಡಿ,
ಉಪೇಂದ್ರ ಭಟ್, ಶ್ರೀಕಾಂತ ದೇಶಪಾಂಡೆ, ಶ್ರೀನಿವಾಸ್ ಜೋಶಿ(ಭೀಮಸೇನರ ಮಗ) ಅಕ್ಷರಶಃ ಸ್ವರಗಂಗೆ ಹರಿಸಿದ್ರು. ಅದರಲ್ಲಿ ವಿಶೇಷ ಅಂದ್ರೆ ಉಪೇಂದ್ರ ಭಟ್ "ಭಾಗ್ಯದ ಲಕ್ಷ್ಮಿ.." ಹಾಡಿ ನಲಿದರು. ಅಂದ್ರೆ ಮರಾಠಿಗರು
ಬೆಳಗಾವಿ ವಿಶಯದಲ್ಲಿ ಏನೇ ಇರಲಿ ಇಂಥ ವಿಷಯ ಬಂದಾಗ ಚಪ್ಪಾಳೆ ಹೊಡಿಯುವುದಕ್ಕೂ ಮುಂದು..!

ಇನ್ನೇನು ಎರಡುದಿನ ಕಳೆದು ಸಮ್ಮೇಳನ ಸುರುಆಗಲಿದೆ. ಹಾದಿ ಬೀದಿ ಸಿಂಗಾರಗೊಳ್ಳುತ್ತಿವೆ. ನಮ್ಮ ರಾಜಕಾರಣಿಗಳ
ಅಂದು ಧರಿಸುವ ಅಂಗಿ ಇಸ್ತ್ರಿಗೊಳ್ಳುತ್ತಿವೆ. ಎಷ್ಟಿದ್ದರೂ ಅವರದೇ ಕಾರುಭಾರು. ಸಾಹಿತ್ಯ, ಸಾಹಿತಿ,ಅದರ ಮಹತ್ವ
ಎಲ್ಲ ಹಿಂದೆಸರಿದು ಸ್ಟಾರ್ಚ ಹಾಕಿದ ರಾಜಕಾರಣಿಗಳ ಖಾದಿ ಮಿನುಗುವ ಪರ್ವ. ಭಾನುವಾರದ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಚಂದ್ರಕಾಂತ್ ಪೋಕಳೆ ನಾವು ಮಾಡುವ ಸಮ್ಮೇಳನ ಹಾಗೂ ಮರಾಠಿಗರು ಮಾಡುವ ಸಮ್ಮೇಳನಕ್ಕೆ
ಇರುವ ವ್ಯತ್ಯಾಸ ಹೇಳಿದ್ದಾರೆ. ಅಲ್ಲಿ ಬರೆದ ವಿಷಯ ಅನುಕರಣೀಯ. ಆದರೆ ಅದನ್ನು ಆಚರಣೆಗೆ ತಂದರೆ ನಮ್ಮ
ಕಸಾಪ್ ದ ಪಾಡೇನು..?ಉಸ್ತುವಾರಿ ಹೊಂದಿದ ಸಚಿವರ ಶಾಸಕರ ಗತಿ ಏನು? ಪಾಪ ಜೇಬು ಇನ್ನೂ ದೊಡ್ಡದಾಗಿ
ಹೊಲಿಸಿಕೊಂಡಿದ್ದಾರೆ ಅದು ತುಂಬಬೇಡವೇ... ಸಮ್ಮೇಳನದ ಅಧ್ವಾನಗಳು, ಹಗರಣಗಳು ಹೇಗೆ ಇರಲಿ..ಆದರೆ
ಅಧ್ಯಕ್ಷರಾಗಲಿರುವ "ಜೀವಿ" ಬಗ್ಗೆ ಕೊಂಕಿಲ್ಲ. ಅಧ್ಯಕ್ಷಗಿರಿ ಅವರಿಗೆ ಕೊಟ್ಟು ಕಸಾಪ ಗೌರವ ಸಂಪಾದಿಸಿದೆ ಅಂತಲೇ
ಹೇಳಬೇಕು.

ಈಜಿಪ್ತ ಜನ ಸಿಡಿದೆದ್ದಿದ್ದಾರೆ.ಮುಬಾರಕ್ ಓಡಿಹೋಗಲು ತಯಾರಾಗಿದ್ದಾನೆ. ಅನ್ಯಾಯ ಅಕ್ರಮ ಅರಾಜಕತೆಇವೇ
ಆ ಜನ ಅನುಭವಿಸುತ್ತಿರುವುದು. ಅವರು ಸಂಘಟಿತರಾಗಿದ್ದಾರೆ.ಬೀದಿಗಿಳಿದಿದ್ದಾರೆ. ನಮ್ಮ ಸ್ಥಿತಿ ಭಿನ್ನ ವಲ್ಲ. ಬಡವರು
ಖುಷಿಯಿಂದ ತಿನ್ನುವ ಉಳ್ಳಾಗಡ್ಡಿ ಸಹ ಅಕ್ರಮವಾಗಿ ದಾಸ್ತಾನಾಗಿತ್ತು. ಬೆಲೆ ಗಗನ ಮುಟ್ಟಿತ್ತು. ಶಾಂತಿಪ್ರಿಯರಾದ
ನಾವು ಅಲ್ಲಿ ಇಲ್ಲಿ, ಬಸ್ಸಿನಲ್ಲಿ, ಚಾಟ್ ಗಳಲ್ಲಿ, ಬಜ್ ಗಳಲ್ಲಿ ಚರ್ಚಿಸಿದೆವು...ಮತ್ತೆಲ್ಲ ಮರೆತೆವು. ಕಪ್ಪುಹಣದ ಖುಲಾಸೆಸಾಧ್ಯನೇ ಇಲ್ಲ ಅಂತ ಅರ್ಥಮಂತ್ರಿ ಹೇಳ್ತಾರೆ.., ಆಡಿಟರ್ ಕೊಟ್ಟ ಅಂಕಿನೇ ತಪ್ಪು ಅಂತ ಕಪಿಲ್ ಸಿಬಲ್ ಹೇಳ್ತಾರೆ..,ನಾವು ಎಂದೂ ಸೇಫ್ ಅಲ್ಲ ಭಯೋತ್ಪಾದಕರು ಬೇರೆ ರೂಪದಲ್ಲಿ ಬರುತ್ತಾರೆ ಅಂತ ಸ್ವತಃ ಗೃಹ ಮಂತ್ರಿನೇ ಹೇಳ್ತಾರೆ...! ನಾವೆಲ್ಲಿದ್ದೇವೆ ಎಲ್ಲಿ ಹೋಗುತ್ತಿದ್ದೇವೆ ಪ್ರಶ್ನಿಸಿಕೊಳ್ಳಲು ಸಕಾಲ ಇದು ಏನಂತೀರಿ..?

ಅಮೇರಿಕಾದ ವಿಶ್ವವಿದ್ಯಾಲಯವೊಂದು ಭಾರತೀಯ ಮೂಲದ ಹದಿನೆಂಟು ವಿದ್ಯಾರ್ಥಿಗಳಿಗೆ ರೇಡಿಯೋ ಕಾಲರ್
ಕಟ್ಟಿದೆ. ಆ ವಿವಿ immigration ನಿಯಮ ಪಾಲಿಸಿಲ್ಲ ಇದು ಅಲ್ಲಿಯ ಸರಕಾರದ ದೂರು. ಆದರೆ ವಿದ್ಯಾರ್ಥಿಗಳ
ಪಾಡೇನು? ನಮ್ಮ ವಿದೇಶಮಂತ್ರಿ ಕೈ ತೊಳೆಯುವ ಮಾತಾಡಿದ್ದಾರೆ. ವಿದ್ಯಾರ್ಥಿಗಳ ಪಾಡು ದೇವರಿಗೆ ಪ್ರಿಯ.

ಅಂತೂ ಕೊಲ್ಕತ್ತಾ ಬಡವಾಯಿತು. ೨೭/೦೨ ರ ವಿಶ್ವಕಪ್ ಪಂದ್ಯ ಬೆಂಗಳೂರಿನಲ್ಲಿ. ಧೋನಿ ಆತ್ಮವಿಶ್ವಾಸದಿಂದಿದ್ದಾನೆ. ಇದೇ ತರ ಎಲ್ಲರೂ..ಒಟ್ಟಿನಲ್ಲಿ ರಸದೌತಣ್ ಇದೆ.