ಸೋಮವಾರ, ಏಪ್ರಿಲ್ 4, 2011

ಅಫ್ರಿದಿಯ ಬೊಗಳುವಿಕೆ ಹಾಗೂ ನಮ್ಮ ತಿಕ್ಕಲುತನಗಳು..

"ಸಮಾ" ಎನ್ನುವ ನ್ಯೂಸ್ ಚಾನೆಲ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಅಫ್ರಿದಿ ಅಂದ---
""In my opinion, if I have to tell the truth, they (Indians) will never have hearts like Muslims and Pakistanis. I don't think they have the large and clean hearts that Allah has given us,"

ಅವನ ಮಾತುಗಳಲ್ಲಿ ಸತ್ಯಇದೆಯೋ ಇಲ್ಲವೋ ಇಲ್ಲಿರುವ ಮುಸ್ಲಿಮ್ ರು ಹೇಳಬೇಕು. ಇದು ಸೋತವನ ಹತಾಶ
ನುಡಿಯೋ ಅಥವಾ ಮನದಲ್ಲಿ ಮಥಿಸಿಮಥಿಸಿ ಕಾರಿದ ವಿಷವೋ ಗೊತ್ತಿಲ್ಲ. ಒಂದೇ ಮಾತಿನಲ್ಲಿ ಭಾರತವನ್ನು ಇಬ್ಭಾಗ ಮಾಡಿದ್ದಾನೆ. ಅಲ್ಲಾಹು ಕೊಟ್ಟ ದೇಣಿಗೆ ಹೃದಯ ಅದು ಭಾರತೀಯರಲ್ಲಿಲ್ಲ ಇದು ಅವನ ಅಂಬೋಣ.
ಈ ಮಾತಿಗೆ ಆಗಲೇ ಅಲ್ಲಿಯ ಬೋರ್ಡು ಪ್ರತಿಕ್ರಿಯಿಸಿದೆ.ಅದು ಅವನ ವ್ಯಕ್ತಿಗತ ಪ್ರತಿಕ್ರಿಯೆ ಎಂದು ತಿಪ್ಪೆ ಸಾರಿಸಿದೆ.
 ಇಲ್ಲಿಯ ಮುಸ್ಲಿಂ ಬೋರ್ಡು ಅದನ್ನು ಖಂಡಿಸಿದೆ. ಅದು ತಿಕ್ಕಲುತನ ಎಂದಿದೆ. ಆದರೆ ಒಳಗೆಲ್ಲೋ ಅವ ನಿಜ ಹೇಳುತ್ತಿರಬಹುದು ಎಂಬ ಒಂದು ಖುಷಿಯ ಅಲೆ ಮನದಲ್ಲಿ ಮೂಡಿರಲು ಸಾಕು.
 ಇರಬಹುದೇನೋ ಅವರಿಗೆ ಅತೃಪ್ತಿ ಅದು ಒಂಥರಾ ರೋಗ.
ಸವಲತ್ತುಗಳು ,ರಿಷುವತ್ತುಗಳು ಸಿಕ್ಕಷ್ಟು ಈ ರೋಗ ಉಲ್ಬಣಿಸುತ್ತದೆ.

ಈಗ ಅಫ್ರಿದಿ ಯ ಮಾತು ಆ ದೇಶದ ಈಗಿನ ನಿಲುವನ್ನು ಬಿಂಬಿಸುತ್ತವೆಯೇ ಅಥವಾ ಅದು ಹುಚ್ಚು ನಾಯಿಯ ಬೊಗಳುವಿಕೆಯೇ .ಅಫ್ರಿದಿ ಆ ದೇಶದ ಕ್ರಿಕೆಟ್ ತಂಡ ಮುನ್ನಡೆಸಿದವ. ಒಂದು ರೀತಿಯಲ್ಲಿ ಪ್ರತಿನಿಧಿ ಅವ.
ಹೀಗಿರುವಾಗ ಅವನ ಪ್ರಲಾಪ ಕೇವಲ ವೈಯುಕ್ತಿಕ ಅದು ಪಾಕ್ ಅಥವಾ ಒಟ್ಟಾರೇ ಮುಸಲ್ಮಾನರ ನಿಲುವು ಆಗಲು
ಸಾಧ್ಯನೇ ಇಲ್ಲ ಹೀಗೊಂದು ವಾದ ಏಳಬಹುದು. ಈ ವಾದ ನಾ ಒಪ್ಪುತ್ತೇನೆ ಆದರೆ ಹುಚ್ಚುನಾಯಿಗೆ ಕಲ್ಲೆಸೆಯಬೇಕು
ಹೊರತು ರೊಟ್ಟಿ ನೀಡಬಾರದು. ಆ ದೇಶದ ಪ್ರಧಾನಿಯಾಗಲಿ. ನಾಯಕರಾಗಲಿ ಅವನ ಮಾತು ಖಂಡಿಸಲೇ ಇಲ್ಲ.
ಅವ ನಿಜಾನೇ ಹೇಳುತ್ತಿರುವುದು ಎಂದು "ಆಫ್ ದಿ ರಿಕಾರ್ಡ" ಹೇಳುತ್ತಿರಬಹುದು. ಪಾಕಿಸ್ತಾನ ಯಾವಾಗಿದ್ದರೂ
ನಮಗೆ ಮಗ್ಗುಲ ಮುಳ್ಳು. ಆಗಾಗ ಚುಚ್ಚುತ್ತದೆ. ಇದು ನಿಜ.

ನಮ್ಮ ರಾಜತಾಂತ್ರಿಕತೆ ಇಷ್ಟು ಕೆಳಮಟ್ಟ ಕಂಡಿತೇಕೆ ಗೊತ್ತಾಗುತ್ತಿಲ್ಲ. ಮ್ಯಾಚಿನ ನೆವ ಮಾಡಿ ಗಿಲಾನಿಯನ್ನು
ಆಹ್ವಾನಿಸಿ ಅವನಿಗೆ ಉಣಬಡಿಸಿದೆವು. ಹೊಸ ಹೆಜ್ಜೆ ಎಂದು ಕೇಂದ್ರ ಸರಕಾರ ಹೇಳಿಕೊಂಡೀತು. ಯಾವಾಗಾವಾಗ
ನಾವು ಅವರೆಡೆಗೆ ಕೈ ಚಾಚಿದಾಗ ನಮಗೆ ಸಿಕ್ಕಿದ್ದು ಕಾರ್ಗಿಲ್,೨೬/೧೧ ಈಗ ಅಫ್ರಿದಿಯ ಈ ಮಾತುಗಳು.
ಮೀಡಿಯಾದ ಗಮನ ಬೇರೆಡೆಗೆ ಸೆಳೆಯಲು ಪ್ರಧಾನಿ ಈ ತಂತ್ರ ಹೂಡಿದರು ಅನಿಸುತ್ತದೆ. ಆದರೆ ಅದು ತಿರುಗುಬಾಣವಾಗಿದೆ ಅಫ್ರಿದಿಯ ಈ ಮಾತಿನಲ್ಲಿ. ಗಿಲಾನಿ ಬಂದ ಕೈ ಕುಲುಕಿದ ಪೊಗದಸ್ತಾಗಿ ಉಂಡ ಅಲ್ಲಿ ಹೋದ
ಎಲ್ಲ ಮರೆತ. ಇದು ಕೇಂದ್ರದ ಕಣ್ಣು ತೆರೆಸಿತೆ ನೋಡಬೇಕು.

ಅಫ್ರಿದಿಯ ಮಾತು ನನ್ನ ಅನಿಸಿಕೆ ಬಜ್ ನಲ್ಲಿ ಹಾಕಿದ್ದೆ. ಅನೇಕ ಜನ ಪ್ರತಿಕ್ರಿಯಿಸಿದರು. ಆಜಾದ್ ಭಾಯಿ ನಾ ಅವರಿಗೆ
ನೋವುಂಟು ಮಾಡಿದೆ ಎಂದು ಗೂಬೆ ಕೂರಿಸಿದರು. ಆದರೆ ಸತ್ಯ ಏನು ಅವರಿಗೂ ಗೊತ್ತು. ಅದನ್ನು ಒಪ್ಪಿಕೊಳ್ಳುವ
ಅಫ್ರಿದಿಯ ಮಾತು ನಮ್ಮ ಸಮುದಾಯದ್ದಲ್ಲ ಅಂತ ಹೇಳಬೇಕಾಗಿತ್ತು. ಮಾತು ಮರೆಸಿ ಅದೇ ಊಟ, ವಿನೋದ ಹೀಗೆ
ಮಾತು ಬದಲಿಸಿದರು. ಹೇಳುವುದಿಷ್ಟೇ  ಅಫ್ರಿದಿಯ ಮಾತು ವೈಯುಕ್ತಿಕ ಆಗೊಲ್ಲ ಅವನಿಗೆ ಅಲ್ಲಿ ಬೆಂಬಲವಿದೆ ಅವನ
ನಿಲುವು ಅಲ್ಲಿಯ ಜನರ ಭಾವನೆ ಬಿಂಬಿಸುತ್ತದೆ. ಇಂಥಾ ದೇಶದ ಜೊತೆ ಮತ್ತೆ ಮಾತು ಆಡುವ ಹುಂಬತನ ನಮಗೆ
ಬೇಡ ಅಲ್ಲವೇ....!

ಭಾನುವಾರ, ಏಪ್ರಿಲ್ 3, 2011

ಗೋಲ್ ಕೀಪರ್ ನಿಂದ ವಿಶ್ವಕಪ್ ವರೆಗೆ...











ಹೌದು ಅವ ಮೊದಲು ಗೋಲ್ ಕೀಪರ್ . ಹಿಂದುಳಿದ ಜಾರ್ಖಂಡ್ ನಿಂದ ಬಂದವ ಇಂದು ಕೋಟಿ ಕೋಟಿ ಭಾರತೀಯರ ಆರಾಧ್ಯ ದೈವ.
ಬಹುಶಃ ಸಚಿನ್ ಬಿಟ್ಟರೆ ಜಾಹೀರಾತಿನಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುವ ವ್ಯಕ್ತಿ ಅವ. ಅದೊ ಮೊಬೈಲ್ ನಿಂದ ಹಿಡಿದು ಸೀಲಿಂಗ್ ಫ್ಯಾನ್
ಜಾಹೀರಾತಾಗಿರಬಹುದು ಅಲ್ಲಿ ಅವ ಹಾಜರ್ರು. ನಿನ್ನೆ ನಡೆದ ಫೈನಲ್ ಅವನ ಉತ್ತುಂಗದ ಸೀಮೆ ಅಥವಾ ಇಂತಹ ಸೀಮೆಗಳೆ
ಉಲ್ಲಂಘನೆ ಮೇಲಿಂದ ಮೇಲೆ ಆಗುತ್ತಲೇ ಇರುತ್ತದೆ. ಅವನ ಹೆಸರು ಮಹೇಂದ್ರ ಸಿಂಗ್ ಧೋನಿ.
೨೦೦೩ರಲ್ಲಿ ಮುಂಬೈಯಲ್ಲಿ ಒಂದು ಸಾದಾ ಮ್ಯಾಚು ನಡೆದಿತ್ತು. ಭುಜದವರೆಗೆ ಕೂದಲಿದ್ದ ಒಬ್ಬ ಯುವಕ ಬಾರಿಸಿದ ಸಿಕ್ಸರ್ ಮೈದಾನದ
ಆಚೆ ಇರೋ ಗರವಾರೆ ಕ್ಲಬ್ ನ ಗಾಜು ಒಡೆದಿತ್ತು. ನೋಡಿದವರು ಬೆರಗಾಗೋ ವಿಭಿನ್ನ ವಿಚಿತ್ರ ಬ್ಯಾಟಿಂಗು. ಅವನ ಶೈಲಿ, ಧಿಮಾಕು
ಎಲ್ಲರ ಗಮನಸೆಳೆದಿತ್ತು. ಗೋಲಕೀಪರ್ ಆದ ಅನುಭವ ಬೇರೆ ಸಹಜವಾಗಿ ವಿಕೆಟ್ ಕೀಪರ್ ಆದ. ಆಕ್ರಮಣ ಅವನ ಅಸ್ತ್ರ.
ಆ ಅಸ್ತ್ರ ಬಳಕೆಯಾಗಿದ್ದು ಲಂಕಾ ವಿರುದ್ಧ ೧೮೩ ರನ್ ಚಚ್ಚಿದಾಗ. ಕ್ರಿಕೆಟ್ ಪಂಡಿತರು ಬೆರಗಾದರು ತಲೆದೂಗಿದರು. ಮಹೇಂದ್ರ ಧೋನಿ
ಮಾಹಿ ಯಾಗಿ ಹೆಸರುಗಳಿಸಿದ್ದು ಪಾಕ್ ಪ್ರವಾಸದಲ್ಲಿ. ಸ್ವತಃ ಮುಶ್ರಫ್ ಅವನ ಆಟ್ ಹಾಗೂ ಚಿಮ್ಮುವ ಕೂದಲಿಗೆ ಮೆಚ್ಚಿಗೆ ಸೂಸಿದ.
ಮಾಹಿಯ ಆಟ ಕುಸಿದಿದ್ದು ನಂತರ ಚೇತರಿಸಿಕೊಂಡಿದ್ದೂ ಇದೆ. ೨೦೦೭ ರ ವಿಶ್ವಕಪ್ ಸೋಲು ಹೊಸ ನಾಯಕನ ಹುಡುಕಾಟದಲ್ಲಿದ್ದಾಗ
ಕಂಡಿದ್ದು ಇವ.೨೦-೨೦ವಿಶ್ವಕಪ್ ನಾಯಕತ್ವ. ತರುಣರ ಪಡೆ ಕಟ್ಟಿಕೊಂಡು ಹೋರಾಡಿದ. ಪಾಕ್ ವಿರುದ್ಧ ಗೆಲುವು ಸಾಧಿಸಿ ಕಪ್ ಎತ್ತಿ
ಹಿಡಿದ. ೨೦೦೮ರ ಆಸಿಸ್ ವಿರುದ್ಧ ಒನ್ ಡೇ ಗಳಿಗೆ ನಾಯಕನಾದ. ನಾಯಕತ್ವದಲ್ಲಿ ಅನೇಕ ಜಯ ಮೂರು ಫೈನಲ್ ಪಂದ್ಯಗಳಲ್ಲಿ
ಎರಡನ್ನು ಗೆದ್ದು ಆ ನೆಲದಲ್ಲಿ ಗೆಲುವು ಸಾಧಿಸಿದ ಮೊದಲಿಗನಾಗಿ ಮೆರೆದ. ಇದಾದ ನಂತರ ಟೆಸ್ಟ್ ಟೀಮ್ ನಾಯಕತ್ವ. ಕೀಪಿಂಗ್ ಮಾಡುತ್ತ
ಬ್ಯಾಟ್ ಬೀಸುತ್ತ ಯೋಜನೆಗಳ ರೂಪಿಸುತ್ತ ಹೀಗೆ ಧೋನಿ ಸದಾಕಾಲ ಬಿಸಿ ಮನುಷ್ಯ.
ಈ ಮೊದಲಿನ ನಾಯಕ ಗಂಗೂಲಿ ಟೀಮನಲ್ಲಿ ಬೇಡ ಎಂದಾಗ ದೊಡ್ಡ ಗದ್ದಲವಾಗಿತ್ತು. ದಾದಾನ ದಾದಾಗಿರಿ ಮುಗಿಯಲು ಧೋನಿಯ
ನಿಲುವು ಕಾರಣ. ಈಗಲೂ ಹಿರಿಯರಾದ ಸಚಿನ್,ದ್ರಾವಿಡ್ ಮತ್ತು ವಿವಿಎಸ್ ತಂಡದಲ್ಲಿದ್ದಾರೆ. ಅವರ ಪಾಂಡಿತ್ಯಕ್ಕೆ ಅವ ಗೌರವಾನೂ ಕೊಟ್ಟಿದ್ದಾನೆ
ಹಾಗೆಯೇ ನಿರ್ಣಯ ಮಾತ್ರ ತನ್ನಬಳಿ ಇಟ್ಟುಕೊಂಡಿದ್ದಾನೆ. ಮಾಹಿಯ ನಿರ್ಣಯಗಳು instinct ಮೇಲೆ ಆಧಾರಿತ. ಅನೇಕ ಉದಾಹರಣೆಗಳಿವೆ
ಹಲವಾರು ಸಾರಿ ಅವು ಉಲ್ಟಾ ಆಗಿವೆ. ಆದರೆ ಧೋನಿ ಹಿಂದೆ ಸರಿದಿಲ್ಲ. ಈಗಂತೂ ಅವ ವಿಶ್ವ ವಿಜೇತ, ಮುಂದೆ ಇನ್ನೂ ಸಾಗಬೇಕಾಗಿದೆ
ಧೋನಿ ನಿಲ್ಲುವ ಆಸಾಮಿಯಂತೂ ಖಂಡಿತ ಅಲ್ಲ.