ಶನಿವಾರ, ಮಾರ್ಚ್ 5, 2011

ಕನ್ನಡವೆನೆ ಎನ್ನೆದೆ...

ಇತ್ತೀಚೆಗಿನ ಎರಡು ಸಂಗತಿಗಳು ನಮ್ಮ ಕನ್ನಡ ನುಡಿ ಈ ರಾಜ್ಯದ ಘನತೆ ಬಗ್ಗೆ ಹತ್ತು ಹಲವು ವಿಚಾರಗಳ ಚರ್ಚೆಗೆ ವೇದಿಕೆಯಾಗಿವೆ.
ಅದು ಹೇಮಾಮಾಲಿನಿ ನಮ್ಮ ರಾಜ್ಯದಿಂದ ಆರಿಸಿ ಬಂದಿದ್ದಿರಬಹುದು ಅಥವಾ ಬೆಳಗಾವಿಯಲ್ಲಿ ನಾರಾಯಣ ಮೂರ್ತಿ ಅವರು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಲಿರುವುದು.
ಇವೇ ಆ ಎರಡು ವಿದ್ಯಮಾನಗಳು. ಪತ್ರಿಕೆಯಲ್ಲಿ ಮಾತ್ರವಲ್ಲದೇ ನೆಟ್ ಲೋಕದಲ್ಲು ಚರ್ಚೆಗೆ ಗ್ರಾಸವಾಗಿತ್ತು. ಇದು ಒಳ್ಳೆಯ ಬೆಳವಣಿಗೆ. ಚರ್ಚೆ ಯಾವಾಗಲೂ ಭಿನ್ನ ದನಿ
ಗಳನ್ನು ಕೇಳಿಸುತ್ತದೆ. ಮತ್ತು ಭಿನ್ನ ಸ್ವರ ಕೇಳಿಸುತ್ತದೆ..ಆದರೆ ಪೂರ್ವಾಗ್ರಹ ಪೀಡಿತ ಕಿವಿಗಳಿಗೆ ಭಿನ್ನ ರಾಗ ಬೇಕಾಗಿಲ್ಲ.ಫೇಸ್ ಬುಕ್ ನಲ್ಲಿ ನಾ ಹಾಕಿದ ಕಾಮೆಂಟಿಗೆ
ಉತ್ತರವಾಗಿ ನನ್ನ ಮಾತೃಭಾಷೆ ಯಾವುದೆಂದು ಪ್ರಶ್ನಿಸಲಾಯಿತು. ನಾ ಅದಕ್ಕೆ ಸರಿಯಾದ ಉತ್ತರ ಕೊಟ್ಟೆ. ಸ್ನೇಹಿತ ರೋರ್ವರು ಬರೆಯುತ್ತ ವಿಶ್ವಕನ್ನಡ ಸಮ್ಮೇಳನ
ಮಲ್ಯ ಅವರು ಉದ್ಘಾಟಿಸಲಿ ಎಂದು ಕುಹಕವಾಡಿದರು. ಈಗ ಮೂರ್ತಿ ಅವರಿಗೂ ಇರಿಸುಮುರಿಸಾಗಿ ನಮ್ಮ ಮುಖ್ಯಮಂತ್ರಿ ಜೊತೆ ನಕಾರ ಸೂಚಿಸಿದ್ದರೂ ತಮ್ಮ ಮೂಗು
ಎಲ್ಲಿ ಮಣ್ಣಾಗುತ್ತದೆ ಎಂಬ ಹೆದರಿಕೆ ಸರಕಾರಕ್ಕೂ ಬಂದು ಶತಾಯ ಗತಾಯ ಮೂರ್ತಿ ಅವರೇ ಅದನ್ನು ಉದ್ಘಾಟಿಸಲಿದ್ದಾರೆ ಅಂತ ಹೇಳಿಕೆ ಬಂದಿದೆ.
ಇರಲಿ ನನ್ನದೊಂದು ಮೂಲಪ್ರಶ್ನೆ ಇದೆ. ಈ ಸಮ್ಮೇಳನ ಯಾಕೆ ನಾವು ಕನ್ನಡದವರು ವಿಶ್ವದಾದ್ಯಂತ ಕನ್ನಡ ಪ್ರೇಮಿಗಳಿದ್ದಾರೆ ಅವರು ಒಂದೆಡೆ ಸೇರಿ ಉತ್ಸವ
ಆಚರಿಸುತ್ತಾರೆ. ನಿಜ ಅದರಿಂದ ಏನು ಸಾಧಿಸುವೆವು ನಾವು ಉತ್ತರ ಗೊತ್ತಿದ್ದೆ. ಶೂನ್ಯ. ಕನ್ನಡತನ ನಿಧಾನವಾಗಿ ನಶಿಸಿಹೋಗಿದೆ. ನಾ ಬೆಂಗಳೂರಲ್ಲಿ ಇದ್ದು
ನಾಲ್ಕು ವರ್ಷ ಮುಗಿದಿವೆ. ದಿನೇ ದಿನೇ ಕನ್ನಡ ಸಾಯುವುದನ್ನೇ ನೋಡುತ್ತಿರುವೆ. ಬೆಂಗಳೂರಿನಲ್ಲಿ ಪ್ರತಿಶತ ೩೨ ಮಾತ್ರ ಕನ್ನಡಿಗರಿದ್ದಾರೆ ಅಂತ ಸರ್ವೆ ಹೇಳುತ್ತದೆ.
ಇಲ್ಲಿ ಜನ ಈ ಮೊದಲು ತಮಿಳರನ್ನು, ಮಲೆಯಾಳಿಗರನ್ನು ಕೈ ಬೀಸಿ ಕರೆದರು ಇಲ್ಲಿಯ ಸರಕಾರಿ ಸಂಸ್ಥೆಗಳಲ್ಲಿ ಕನ್ನಡಿಗರನ್ನು ಹಿಂದಿಕ್ಕಿ ಅವರು ಮೆರೆದಾಗ ಹಲ್ಕಿರಿದು
ಅವರ ಬಾಲಬಡಿದರು. ಈಗ ಐಟಿ ಬಿಟಿಗಳಲ್ಲೂ ಅದೇ ಹಾಡು. ಕನ್ನಡಿಗರು ಮರೆಯಾಗಿದ್ದಾರೆ ಮೂರ್ತಿ ಮುಂತಾದವರು ಕನ್ನಡಿಗರಿಗೆ ಕೆಲಸ ಕೊಡುತ್ತಿಲ್ಲ ಅಂತ ಬೊಬ್ಬೆ
ಹೊಡೆಯುವುದೇಕೆ..ಬಹುತೇಕ ಐಟಿ ಸಂಸ್ಥೆಗಳಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿರುವವರು ಕನ್ನಡೇತರರು. ಹೀಗಾಗಿ ಸಹಜವಾಗಿಯೇ ಸ್ವಭಾಷಾ ಉದಾರತೆ
ಇರುತ್ತದೆ. ಇನ್ನು ಇದಕ್ಕೆ ನಾವು ಅಂದರೆ ಕನ್ನಡಿಗರು ಕಾರಣಕರ್ತರು. ಇತರೆ ರಾಜ್ಯದವರಹಾಗೆ ನಾವು ಕೆಲಸ ಮಾಡಲಾರೆವು. ನಮ್ಮಲ್ಲಿ dignity of labour ಇದೆ.
ಬಿಎಮಟಿಸಿ ಯಲ್ಲಿ ಕೆಲಸಕ್ಕಿರುವ ಚಾಲಕ ನಿರ್ವಾಹಕ ರಲ್ಲಿ ಬಹುಪಾಲು ಜನ ಬೆಂಗಳೂರು ಹೊರಗಿನವರೇ...! ಹೋಗಲಿ ಬಡಾವಣೆಯ ಹೆಸರಾಗಲಿ ,ಸ್ಟಾಪ್ ಆಗಲಿ
ಕನ್ನಡ ದಲ್ಲಿವೇಯೇ..ಕೆಂಬನಿ ಅಂದರೆ ಇಲ್ಲಿ ಯಾರಿಗೂ ಗೊತ್ತೇ ಆಗೂದಿಲ್ಲ ಅದೇ ಮೆಜೆಸ್ಟಿಕ್ ಅಂದರೆ ಬಲ್ಬು ಹೊತ್ತಿಕೊಳ್ಳುತ್ತೆ. ಇನ್ನೆಷ್ಟು ದಿನ ನಾವು ಈ ವೈಯಾಲಿ ಕಾವಲ್,
ಕೆ ಆರ್ ಪುರಂ, ಮಲ್ಲೇಶ್ವರಂ , ಫೋರ್ತ್ ಬ್ಲಾಕ್, ನಾರ್ತ್ ರೋಡ್ ಅಂತ ಹೇಳಬೇಕೋ ಗೊತ್ತಿಲ್ಲ. ಮದ್ರಾಸು ಚೆನ್ನೈ ಆಗಿ ಬಹಳೇ ದಿನ ಆದ್ವು. ಬ್ಯಾಂಗಲೋರ್ ಇನ್ನೂ
ಬೆಂಗಳೂರು ಆಗಿಲ್ಲ. ನಮ್ಮ ಪೀಳಿಗೆಗೆ ಆ ದಿನ ನೋಡುವ ಭಾಗ್ಯವೂ ಇರಲಿಕ್ಕಿಲ್ಲ.
ಹಳೇ ಮೈಸೂರು ಕಡೆ ಜನ ರಾಜಕೀಯ ಮಾಡಿ ಉತ್ತರ ಕರ್ನಾಟಕಕ್ಕೆ ಯಾವ ಅಭಿವೃದ್ಧಿಯೂ ಸಿಗದಂತೆ ನೋಡಿಕೊಂಡ್ರು. ನಮ್ಮ ಕಡೆ ಜನ, ನಮ್ಮ ಭಾಷೆ ನಮ್ಮ ಆಹಾರ
ಇವರಿಗೆ ಅಲರ್ಜಿ. ನಮ್ಮ ಮಾಜಿ ಪ್ರಧಾನಿ ಹುಬ್ಬಳ್ಳಿಗೆ ನೈರುತ್ಯರೇಲ್ವೆ ವಲಯ ಬರುವದನ್ನು ವಿರೋಧಿಸಿದ ರೀತಿ ಇನ್ನೂ ಹಸಿರಾಗಿದೆ. ಮೊದಲು ಕರ್ನಾಟಕ ಅಖಂಡವಾಗಲಿ
ಈ ಪ್ರಾಂತ ಭಾಷೆ ಇವುಗಳಲ್ಲಿನ ಹೀಗಳೆಯುವಿಕೆ ನಿಲ್ಲಲಿ. ಆಮೇಲೆ ಈ ವಿಶ್ವ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳಿಗೊಂದು ಅರ್ಥ ಬರುತ್ತದೆ. ಇಲ್ಲವಾದರೆಇದು ನಮ್ಮ ತೆರಿಗೆ
ದುಡ್ಡಿನಲ್ಲಿ ಈ ಕೊಳಕು ರಾಜಕಾರಣಿಗಳು ತಿಂದು ತೇಗಿ ಹೊಲಸುಮಾಡುವ ಒಂದು ಜಾತ್ರೆ ಮಾತ್ರ.

2 ಕಾಮೆಂಟ್‌ಗಳು:

  1. ಹಳೇ ಮೈಸೂರು ಕಡೆ ಜನ ರಾಜಕೀಯ ಮಾಡಿ ಉತ್ತರ ಕರ್ನಾಟಕಕ್ಕೆ ಯಾವ ಅಭಿವೃದ್ಧಿಯೂ ಸಿಗದಂತೆ ನೋಡಿಕೊಂಡ್ರು. --> ಇದು ಅಕ್ಷರಶಃ ಸರಿಯಾದ ಮಾತು.

    ನಮ್ಮ ಮಾಜಿ ಪ್ರಧಾನಿ ಹುಬ್ಬಳ್ಳಿಗೆ ನೈರುತ್ಯರೇಲ್ವೆ ವಲಯ ಬರುವದನ್ನು ವಿರೋಧಿಸಿದ ರೀತಿ ಇನ್ನೂ ಹಸಿರಾಗಿದೆ. --> ಈ ದರಿದ್ರ ದೇವೇಗೌಡ ಬದುಕಿರುವವರೆಗೆ ಇ೦ಥಹ ಇನ್ನು ಹಲವಾರು ಕೆಲಸಗಳನ್ನು ತಾವೆಲ್ಲರೂ ಕಾಣುವಿರಿ.

    ಮೊದಲು ಕರ್ನಾಟಕ ಅಖಂಡವಾಗಲಿ ಈ ಪ್ರಾಂತ ಭಾಷೆ ಇವುಗಳಲ್ಲಿನ ಹೀಗಳೆಯುವಿಕೆ ನಿಲ್ಲಲಿ. --> ಇದು ಸಾಧ್ಯ ಅ೦ಥಾ ಹೇಳಬಲ್ಲೆ ಆದರೆ ದರಿದ್ರ ದೇವೇಗೌಡನ೦ಥಹ ಕೆಲ ವ್ಯಕ್ತಿಗಳನ್ನು ಯಮರಾಯ ಕರೆದುಕೊ೦ಡು ಹೋದನ೦ತರ ಮಾತ್ರ ಸಾಧ್ಯ.

    ಆಮೇಲೆ ಈ ವಿಶ್ವ ಸಮ್ಮೇಳನ, ಸಾಹಿತ್ಯ ಸಮ್ಮೇಳನಗಳಿಗೊಂದು ಅರ್ಥ ಬರುತ್ತದೆ. ಇಲ್ಲವಾದರೆಇದು ನಮ್ಮ ತೆರಿಗೆ ದುಡ್ಡಿನಲ್ಲಿ ಈ ಕೊಳಕು ರಾಜಕಾರಣಿಗಳು ತಿಂದು ತೇಗಿ ಹೊಲಸುಮಾಡುವ ಒಂದು ಜಾತ್ರೆ ಮಾತ್ರ. ---> ಪ್ರಧ್ಣ್ಯಾವ೦ಥ ಜನರು ಎಚ್ಹೆತ್ತುಕೊಳ್ಳುವವರೆಗೂ ಇದೆ ರೀತಿಯಲ್ಲಿ ಹಣ ಪೋಲಾಗುತ್ತಲೆ ಇರುತ್ತದೆ. ಆದರೆ ಯಾವಾಗ ಎಚ್ಹೆತ್ತಕೊಳ್ಳುತ್ತಾರೆ ಎ೦ಬುದು ಒ೦ದು ಸಾವಿರ ಕೋಟಿಯ ಪ್ರಶ್ನೆ. ಇದು ಈ ಕೆಲ ದಿನಗಳ ಹಿ೦ದೆ ನಾ ಕ೦ಡ ಕರ್ನಾಟಕದ ಜನರ ಮನೋಸ್ತಿತಿ. ಬಹುಮಟ್ಟಿಗೆ ಎಲ್ಲರು ಒ೦ದೆ ತರಹ. ಮೈ ಮುರಿಯದೆ ಊಟ ಸಿಗಬೇಕು. ಯಾವುದೇ ಸರಕಾರಿ ಆಫೀಸುಗಳಲ್ಲಿ ಕೈ ಬೆಚ್ಚಗೆ ಮಾಡಲೇಬೇಕು. ಇಲ್ಲ ಅ೦ದರೆ ಅವರು ಧರ್ಮ ಬ್ರಷ್ಟರಗುತ್ತಾರೆ. ಇದು ನನ್ನ ಸ್ವಂತ ತಮ್ಮನೊ೦ದಿಗೆ ತಿರುಗಾಡಿಡಾಗಿರುವ ಅದ್ಭುತ ಅನುಭವ. ಸ೦ಕ್ಶಿಪ್ತವಾಗಿ ಹೇಳಬೇಕೆ೦ದರೆ ಲ೦ಚ ಕೊಡುವದು ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ.

    ಇ೦ತಹ ದುರ್ಬುದ್ದಿ ಎಲ್ಲಿಯವರೆಗೆ ನಮ್ಮವರನ್ನು ಬಿದುವದಿಲ್ಲವೋ ಅಲ್ಲಿಯವರೆಗೆ ಈ ದರಿದ್ರ ದೇವೇಗೌಡ ಮತ್ತು ಅವನ ಕೌರವ ಸ೦ತಾನದ೦ಥಹ ಅನೇಕ ರಾಜಕಾರಿಣಿಗಳು ಕರ್ನಾಟಕವನ್ನು ಹಿ೦ಡಿ ಹಿಪ್ಪಿಕಾಯಿ ಮಾಡತಾನೆ ಇರುತಾರೆ ನಾವೆಲ್ಲರೂ ಅದನ್ನ ದೇಶ ಬಿಟ್ಟು ದೂರದಲ್ಲಿ ಕೂತುಕೊಂಡು ನೋಡತಾನೆ ಇರ್ತಿವಿ.

    ಪ್ರತ್ಯುತ್ತರಅಳಿಸಿ
  2. ದೇಸಾಯರ,
    ನೀವು ಬರದದ್ದು ನೂರಕ್ಕ ನೂರರಷ್ಟು ಸತ್ಯ ಅದ.
    ಪ್ರಾಮಾಣಿಕ ವಿಚಾರಗಳನ್ನು, ಅಭಿಪ್ರಾಯಗಳನ್ನು ಬರಿಯೋದನ್ನು ಮುಂದುವರೆಸಿರಿ.
    ಜನ ಬದಲಾದರೂ ಆಗಬಹುದು!

    ಪ್ರತ್ಯುತ್ತರಅಳಿಸಿ