ಅವರ ಕೈಯ್ಯಲ್ಲಿನ ಕತ್ತಿ ಮಿನುಗಿತ್ತು..
ತುದಿಗೆ ಕೇಕಿನ ಬೆಣ್ಣೆ ಮೆತ್ತಿತ್ತು..
ಹಿಂದಿರುವ ನೊಣ , ಕಾವಿ ಧರಿಸಿತ್ತು
ಗುಂಯ್ಗುಡುತ್ತಿತ್ತು...
ವಂಧಿಮಾಗಧರ ಬೋ ಪರಾಕು
ನಿಕಟಪೂರ್ವ ದೊರೆಯ ಮುಖದತುಂಬ
ಕವಿದ ಕಾರ್ಮೋಡ..
ಜಾತಿ ಒಂದೇ ವಲಂ ಎಂದು ಬಡಬಡಿಸಿದವನ
ಮುಖ ಸಪ್ಪೆ.. ಅಂತೆಯೇ ಆ ಕತ್ತಿ ನಾಲಿಗೆಗೆ
ಇಳಿದಿತ್ತು..
ಅವರೇನೋ ಕುರುಡರು ..ಚೂರಿ ಅಲಗನ್ನು
ಗುರುತಿಸಲಿಲ್ಲ... ನಾವು ನೀವು
ಕಣ್ಣಿದ್ದವರು..ಅದೆಷ್ಟೋ ಚೂರಿಗಳು ನಮ್ಮೆದೆ
ಎದೆಬಗೆದು ನೆತ್ತರ ಉಂಡರೂ ಮುಖದಿಂದಿನ್ನೂ
ಚೀತ್ಕಾರ ಬಂದಿಲ್ಲ..
ಈ ಕಾವಿ, ಖಾದಿಯ ನಡುವೆ ನಮ್ಮ ಬದುಕು
ಬರಡಾಯಿತಲ್ಲ....!!
ತಮ್ಮ ಜನ್ಮದಿನದಂದು ಕೇಕ್ ಕತ್ತರಿಸಿದ ಚಾಕುವಿನಿಂದಲೇ ಅಂಧ ಬಾಲಕನೊಬ್ಬನ ಬಾಯಿಗೆ ಕೇಕ್ ಹಾಕುತ್ತಿದ್ದ ಮಾಜಿ ಮುಖ್ಯಮಂತ್ರಿಗಳ ಫೋಟೋ ನೋಡಿದ್ದೆ. ಅದು ನಿಮ್ಮ ಕವಿತೆಯ ಹಿನ್ನೆಲೆಯಾದರೂ ಒಟ್ಟು ನಾವು ಇಂದು ಬದುಕುತ್ತಿರುವ ಸನ್ನಿವೇಶದ ವಾಸ್ತವವನ್ನು ಸರಳವಾಗಿ ಹಿಡಿಯಲೆತ್ನಿಸಿದ ಈ ಕವಿತೆಯ ವಿಷಾದ ಅದನ್ನು ಮೀರಿದ್ದಾಗಿದೆ.ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿವಿಡಂಬನೆ ಕತ್ತಿಯಂತೆಯೇ ಹರಿತವಾಗಿದೆ. ಆದರೆ ನಾವು ಕುರುಡರಷ್ಟೇ ಅಲ್ಲ, ಅಪಾಂಗರೂ ಹೌದು!
ಪ್ರತ್ಯುತ್ತರಅಳಿಸಿಹಿಂದಿರುವ ನೊಣ , ಕಾವಿ ಧರಿಸಿತ್ತು..... nijakkoo aa noNagaLige holisoku besaravaagutte Umesh. Ninne ondu video nodthidde Who Is An Idiot antha? naavo namma raajakaranigaLo antha - uttara aspashta.....
ಪ್ರತ್ಯುತ್ತರಅಳಿಸಿkavanada aashaya - shaili ishtavaaythu :)