ಮಂಗಳವಾರ, ಫೆಬ್ರವರಿ 1, 2011

ನಮ್ಮ ಸಾಂಸ್ಕೃತಿಕ ದಿವಾಳಿ...

ನಿನ್ನೆ  ಬಿಬಿಎಂಪಿಯಲ್ಲಿ ಬಿಜೆಪಿ ಸದಸ್ಯರು ಆಡಿದ ಮಾತು ಮತ್ತೆ ಮತ್ತೆ ನಮ್ಮ ಸಾಂಸ್ಕೃತಿಕ
ದಿವಾಳಿತನ ತೋರಿಸುತ್ತದೆ.ಮಾನ್ಯ ಸದಸ್ಯರು ಭೀಮಸೇನ ಜೋಶಿ ಅವರ ನಿಧನದ ಬಗ್ಗೆ ಸಂತಾಪಸೂಚನೆ ಮಂಡನೆ ವೇಳೆ ಆಡಿದ ಮಾತುಗಳು.
ತಮ್ಮ ನಿಲುವೇನು ತಮ್ಮ ಸ್ಥಾನಮಾನಕ್ಕಂತೂ ಕವಡೆಯ ಕಿಮ್ಮತ್ತಿಲ್ಲ. ತಾನು ಯಾರಬಗ್ಗೆ
ಹೇಳುತ್ತಿರುವೆ ಆ ವ್ಯಕಿ ಗಳಿಸಿದ ಉನ್ನತ ಸ್ಥಾನಯಾವುದಿತ್ತು ಆ ವ್ಯಕ್ತಿಯಬಗ್ಗೆ ತಾನು ಹಗುರಾಗಿ ಮಾತನಾಡಿದರೆ ತನ್ನ  ಕಿಮ್ಮತ್ತೇನು ಯಾವುದು ಆ ಸದಸ್ಯ ಯೋಚಿಸಿಲ್ಲ.
ಇದೇ ಮಾತು ಮಹಾರಾಷ್ಟ್ರದಲ್ಲಿ ಯಾರಾದರೂ ಅಂದಿದ್ದರೆ ಹಾಹಾಕಾರ ವಾಗುತ್ತಿತ್ತು. ನಾವೇಕೆ ಹೀಗೆ ಹೊಸ ಗಾಳಿ ಹೊಸ ಆಲೋಚನೆ ನಮ್ಮೆಡೆಗೆ ಸುಳಿಯದಂತೆ ಕಿಡಕಿ ಮುಚ್ಚಿಕೊಂಡಿದ್ದೇವೆ. ಅದ್ಯಾಕೆ ನಾವು ಇನ್ನೂ ಪ್ರಾಂತ, ಜಾತಿ ಇತ್ಯಾದಿ ಚಿಲ್ಲರೆ ಸಂಗತಿಗಳಿಂದ ಮುಕ್ತವಾಗಿಲ್ಲ. ಭೀಮಸೇನ ಜೋಶಿ ಇಡೀ ಭಾರತದ ಆಸ್ತಿ ನಿಜ. ಆದರೆ ಅವರು ಹುಟ್ಟಿಬೆಳೆದಿದ್ದು ಕನ್ನಡಮ್ಮನ ಮಡಿಲಲ್ಲಿ..! ಬಹುಷಃ  ಅವರು ಹಳೇ ಮೈಸೂರು ಕಡೆಯವರಾಗಿದ್ದು ಕರ್ನಾಟಕಿ
 ಹಾಡಿದ್ದರೆ ಬೇರೆಯಾಗುತ್ತಿತ್ತೇನೋ ! ಒಂದು ನೆನಪಿನ ಸಂಚಿಕೆ ಇಲ್ಲ ಯಾವುದೇ ಚಾನೆಲ್ ನಲ್ಲಿ ಅವರು ಹಾಡಿದ ಹಾಡು ಪ್ರಸಾರವಾಗಲಿಲ್ಲ. ಅನೇಕ ಯುವಗಾಯಕರಿದ್ದಾರೆ ನಮ್ಮಲ್ಲಿ..
ಭೀಮಸೇನ ಜೋಶಿಗೆ ಸ್ಮರಣಾಂಜಲಿ ಅಂತ ತಿಳಿದು ಆ ಯುವಗಾಯಕರಿಂದ ಜೋಶಿ ಜನಪ್ರಿಯಗೊಳಿಸಿದ ದಾಸವಾಣಿ ಹಾಡಿಸಬಹುದಿತ್ತು. ಅದೇ ಝಿ ಮರಾಠಿ ಚಾನೆಲ್ ನವರು ತಮ್ಮ ಜನಪ್ರಿಯ"ನಕ್ಷತ್ರಾಚೆ ದೇಣೆ.."
ಕಾರ್ಯಕ್ರಮ ಮಾಡಿದರು. ಸುಮಾರು ಎರಡುಗಂಟೆಗಳವರೆಗೆ ಜೋಶಿಯವರ ಶಿಷ್ಯರಾದ ಮಾಧವ್ ಗುಡಿ,
ಉಪೇಂದ್ರ ಭಟ್, ಶ್ರೀಕಾಂತ ದೇಶಪಾಂಡೆ, ಶ್ರೀನಿವಾಸ್ ಜೋಶಿ(ಭೀಮಸೇನರ ಮಗ) ಅಕ್ಷರಶಃ ಸ್ವರಗಂಗೆ ಹರಿಸಿದ್ರು. ಅದರಲ್ಲಿ ವಿಶೇಷ ಅಂದ್ರೆ ಉಪೇಂದ್ರ ಭಟ್ "ಭಾಗ್ಯದ ಲಕ್ಷ್ಮಿ.." ಹಾಡಿ ನಲಿದರು. ಅಂದ್ರೆ ಮರಾಠಿಗರು
ಬೆಳಗಾವಿ ವಿಶಯದಲ್ಲಿ ಏನೇ ಇರಲಿ ಇಂಥ ವಿಷಯ ಬಂದಾಗ ಚಪ್ಪಾಳೆ ಹೊಡಿಯುವುದಕ್ಕೂ ಮುಂದು..!

ಇನ್ನೇನು ಎರಡುದಿನ ಕಳೆದು ಸಮ್ಮೇಳನ ಸುರುಆಗಲಿದೆ. ಹಾದಿ ಬೀದಿ ಸಿಂಗಾರಗೊಳ್ಳುತ್ತಿವೆ. ನಮ್ಮ ರಾಜಕಾರಣಿಗಳ
ಅಂದು ಧರಿಸುವ ಅಂಗಿ ಇಸ್ತ್ರಿಗೊಳ್ಳುತ್ತಿವೆ. ಎಷ್ಟಿದ್ದರೂ ಅವರದೇ ಕಾರುಭಾರು. ಸಾಹಿತ್ಯ, ಸಾಹಿತಿ,ಅದರ ಮಹತ್ವ
ಎಲ್ಲ ಹಿಂದೆಸರಿದು ಸ್ಟಾರ್ಚ ಹಾಕಿದ ರಾಜಕಾರಣಿಗಳ ಖಾದಿ ಮಿನುಗುವ ಪರ್ವ. ಭಾನುವಾರದ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಚಂದ್ರಕಾಂತ್ ಪೋಕಳೆ ನಾವು ಮಾಡುವ ಸಮ್ಮೇಳನ ಹಾಗೂ ಮರಾಠಿಗರು ಮಾಡುವ ಸಮ್ಮೇಳನಕ್ಕೆ
ಇರುವ ವ್ಯತ್ಯಾಸ ಹೇಳಿದ್ದಾರೆ. ಅಲ್ಲಿ ಬರೆದ ವಿಷಯ ಅನುಕರಣೀಯ. ಆದರೆ ಅದನ್ನು ಆಚರಣೆಗೆ ತಂದರೆ ನಮ್ಮ
ಕಸಾಪ್ ದ ಪಾಡೇನು..?ಉಸ್ತುವಾರಿ ಹೊಂದಿದ ಸಚಿವರ ಶಾಸಕರ ಗತಿ ಏನು? ಪಾಪ ಜೇಬು ಇನ್ನೂ ದೊಡ್ಡದಾಗಿ
ಹೊಲಿಸಿಕೊಂಡಿದ್ದಾರೆ ಅದು ತುಂಬಬೇಡವೇ... ಸಮ್ಮೇಳನದ ಅಧ್ವಾನಗಳು, ಹಗರಣಗಳು ಹೇಗೆ ಇರಲಿ..ಆದರೆ
ಅಧ್ಯಕ್ಷರಾಗಲಿರುವ "ಜೀವಿ" ಬಗ್ಗೆ ಕೊಂಕಿಲ್ಲ. ಅಧ್ಯಕ್ಷಗಿರಿ ಅವರಿಗೆ ಕೊಟ್ಟು ಕಸಾಪ ಗೌರವ ಸಂಪಾದಿಸಿದೆ ಅಂತಲೇ
ಹೇಳಬೇಕು.

ಈಜಿಪ್ತ ಜನ ಸಿಡಿದೆದ್ದಿದ್ದಾರೆ.ಮುಬಾರಕ್ ಓಡಿಹೋಗಲು ತಯಾರಾಗಿದ್ದಾನೆ. ಅನ್ಯಾಯ ಅಕ್ರಮ ಅರಾಜಕತೆಇವೇ
ಆ ಜನ ಅನುಭವಿಸುತ್ತಿರುವುದು. ಅವರು ಸಂಘಟಿತರಾಗಿದ್ದಾರೆ.ಬೀದಿಗಿಳಿದಿದ್ದಾರೆ. ನಮ್ಮ ಸ್ಥಿತಿ ಭಿನ್ನ ವಲ್ಲ. ಬಡವರು
ಖುಷಿಯಿಂದ ತಿನ್ನುವ ಉಳ್ಳಾಗಡ್ಡಿ ಸಹ ಅಕ್ರಮವಾಗಿ ದಾಸ್ತಾನಾಗಿತ್ತು. ಬೆಲೆ ಗಗನ ಮುಟ್ಟಿತ್ತು. ಶಾಂತಿಪ್ರಿಯರಾದ
ನಾವು ಅಲ್ಲಿ ಇಲ್ಲಿ, ಬಸ್ಸಿನಲ್ಲಿ, ಚಾಟ್ ಗಳಲ್ಲಿ, ಬಜ್ ಗಳಲ್ಲಿ ಚರ್ಚಿಸಿದೆವು...ಮತ್ತೆಲ್ಲ ಮರೆತೆವು. ಕಪ್ಪುಹಣದ ಖುಲಾಸೆಸಾಧ್ಯನೇ ಇಲ್ಲ ಅಂತ ಅರ್ಥಮಂತ್ರಿ ಹೇಳ್ತಾರೆ.., ಆಡಿಟರ್ ಕೊಟ್ಟ ಅಂಕಿನೇ ತಪ್ಪು ಅಂತ ಕಪಿಲ್ ಸಿಬಲ್ ಹೇಳ್ತಾರೆ..,ನಾವು ಎಂದೂ ಸೇಫ್ ಅಲ್ಲ ಭಯೋತ್ಪಾದಕರು ಬೇರೆ ರೂಪದಲ್ಲಿ ಬರುತ್ತಾರೆ ಅಂತ ಸ್ವತಃ ಗೃಹ ಮಂತ್ರಿನೇ ಹೇಳ್ತಾರೆ...! ನಾವೆಲ್ಲಿದ್ದೇವೆ ಎಲ್ಲಿ ಹೋಗುತ್ತಿದ್ದೇವೆ ಪ್ರಶ್ನಿಸಿಕೊಳ್ಳಲು ಸಕಾಲ ಇದು ಏನಂತೀರಿ..?

ಅಮೇರಿಕಾದ ವಿಶ್ವವಿದ್ಯಾಲಯವೊಂದು ಭಾರತೀಯ ಮೂಲದ ಹದಿನೆಂಟು ವಿದ್ಯಾರ್ಥಿಗಳಿಗೆ ರೇಡಿಯೋ ಕಾಲರ್
ಕಟ್ಟಿದೆ. ಆ ವಿವಿ immigration ನಿಯಮ ಪಾಲಿಸಿಲ್ಲ ಇದು ಅಲ್ಲಿಯ ಸರಕಾರದ ದೂರು. ಆದರೆ ವಿದ್ಯಾರ್ಥಿಗಳ
ಪಾಡೇನು? ನಮ್ಮ ವಿದೇಶಮಂತ್ರಿ ಕೈ ತೊಳೆಯುವ ಮಾತಾಡಿದ್ದಾರೆ. ವಿದ್ಯಾರ್ಥಿಗಳ ಪಾಡು ದೇವರಿಗೆ ಪ್ರಿಯ.

ಅಂತೂ ಕೊಲ್ಕತ್ತಾ ಬಡವಾಯಿತು. ೨೭/೦೨ ರ ವಿಶ್ವಕಪ್ ಪಂದ್ಯ ಬೆಂಗಳೂರಿನಲ್ಲಿ. ಧೋನಿ ಆತ್ಮವಿಶ್ವಾಸದಿಂದಿದ್ದಾನೆ. ಇದೇ ತರ ಎಲ್ಲರೂ..ಒಟ್ಟಿನಲ್ಲಿ ರಸದೌತಣ್ ಇದೆ.

  

2 ಕಾಮೆಂಟ್‌ಗಳು:

  1. ದೇಸಾಯಿ ಸಾಹೇಬರೇ;ಹೊಸ ಬ್ಲಾಗಿಗೆ ಶುಭಾಶಯಗಳು.ಫಾಲೋಯರ್ಸ್ ಸೈನ್ ಇನ್ ಆಗೋ ಜಾಗ ಇಲ್ವಲ್ಲಾ.ಸೈನ್ ಇನ್ ಆಗೋದು ಹೇಗೆ?

    ಪ್ರತ್ಯುತ್ತರಅಳಿಸಿ
  2. ಭಾರತೀಯರು ಪರದೇಶಗಳಲ್ಲಿ ಅವಮಾನಿತರಾದಾಗ, ನಮ್ಮ ವಿದೇಶ
    ಮಂತ್ರಿಗಳು (ಭಾರತೀಯರ ಎದುರಿಗೆ) ಸಿಡಿದೇಳುತ್ತಾರೆ. ನಮ್ಮ ಪ್ರಧಾನ ಮಂತ್ರಿಯವರಂತೂ ಬಾಯಿ ಹೊಲಿದುಕೊಂಡೇ ಕೂತಿರುತ್ತಾರೆ. ಅವರಿಗೂ ಒಂದು ರೇಡಿಯೋ ಕಂಕಣ ಹಾಕುವದು ಉಳಿದಿದೆ.
    ಪ್ರಚಲಿತ ವರ್ತಮಾನಗಳ ಬಗೆಗೆ ಚೆನ್ನಾಗಿ ಬರೆಯುತ್ತಿದ್ದೀರಿ.

    ಪ್ರತ್ಯುತ್ತರಅಳಿಸಿ